ದೊಡ್ಡ ಸಾಮಗ, ಕೋಳ್ಯೂರು ಪ್ರಶಸ್ತಿಗೆ ದತ್ತಿನಿಧಿ ಸ್ಥಾಪನೆ
ಲೇಖಕರು : ಉದಯವಾಣಿ
ಶುಕ್ರವಾರ, ಒಕ್ಟೋಬರ್ 24 , 2014
|
ಒಕ್ಟೋಬರ್ 22, 2014
|
ದೊಡ್ಡ ಸಾಮಗ, ಕೋಳ್ಯೂರು ಪ್ರಶಸ್ತಿಗೆ ದತ್ತಿನಿಧಿ ಸ್ಥಾಪನೆ
ಉಡುಪಿ :
ಯಕ್ಷಗಾನ ಕಲಾರಂಗ ಯಕ್ಷಗಾನ ಕಲಾವಿದರಿಗೆ ಪ್ರತಿವರ್ಷ ತಲಾ 10,000ರೂ. ನಗದು ಪುರಸ್ಕಾರದ 16 ಪ್ರಶಸ್ತಿಯನ್ನು ನೀಡುತ್ತಿದ್ದು ಈ ವರ್ಷದಿಂದ ಈ ಪ್ರಶಸ್ತಿ ಗುತ್ಛಕ್ಕೆ ಇನ್ನೆರಡು ಪ್ರಶಸ್ತಿಗಳು ಸೇರಲಿವೆ. ಯಕ್ಷ ವಿದ್ವಾಂಸರಿಗೆ ನೀಡುವ 20,000 ರೂ. ಪ್ರಶಸ್ತಿ, ಸಂಘಟನೆಗೆ ಪ್ರದಾನ ಮಾಡುವ 25,000 ರೂ. ಮೊತ್ತದ 'ಶ್ರೀ ವಿಶ್ವೇಶತೀರ್ಥ' ಪ್ರಶಸ್ತಿ ಸೇರಿದಂತೆ ಸಂಸ್ಥೆಯ ಒಟ್ಟು ಪ್ರಶಸ್ತಿಗಳ ಸಂಖ್ಯೆ 20ಕ್ಕೆ ಏರಿದೆ.
ದೊಡ್ಡ ಸಾಮಗರೆಂದೇ ಖ್ಯಾತರಾದ ಮಲ್ಪೆ ಶಂಕರ ನಾರಾಯಣ ಸಾಮಗರ ಹೆಸರಿನಲ್ಲಿ ಮಲ್ಪೆಯವರೇ ಆದ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ ಪ್ರಶಸ್ತಿ ನಿಧಿ ಸ್ಥಾಪಿಸಿರುತ್ತಾರೆ. ಖ್ಯಾತ ಸ್ತ್ರೀವೇಷಧಾರಿ ಡಾ| ಕೋಳ್ಯೂರು ರಾಮಚಂದ್ರ ರಾವ್ ಹೆಸರಿನಲ್ಲಿ ಅವರ ಮಕ್ಕಳು ಪ್ರಶಸ್ತಿ ಸ್ಥಾಪಿಸಿರುತ್ತಾರೆ.
ನ. 9ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನುಕ್ರಮವಾಗಿ ಬಲಿಪ ನಾರಾಯಣ ಭಾಗವತ ಮತ್ತು ಸಂಜೀವ ಬಳೆಗಾರ ಎಸ್. ಇವರು ಮೊದಲ ಪ್ರಶಸ್ತಿ ಪಡೆಯಲಿದ್ದಾರೆಂದು ಸಂಸ್ಥೆ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
ಕೃಪೆ :
http://www.udayavani.com
|
|
|